ದೇವಾ ನಿನ್ನ ನಾಮಾಮೃತವ

ದೇವಾ ನಿನ್ನ ನಾಮಾಮೃತವ
ಸದಾ ಸವಿಯುತಲಿದ್ದರೆ
ಹಸಿವು ಎನಿಸುವುದಿಲ್ಲಾ |
ಸಮಯ ಸವೆಯುವುದೇ
ತಿಳಿಯುವುದಿಲ್ಲಾ||

ಚಿತ್ತದೊಳು ನಿನ್ನನ್ನಿರಿಸಿ
ಮನದಿ ನಿನ್ನ ಸ್ಮರಿಸಿ ನಿತ್ಯ
ಕೆಲಸ ಪ್ರಾರಂಭಿಸೆ
ಯಾವ ವಿಘ್ನಗಳಿಲ್ಲ|
ತಿನ್ನುವ ಅನ್ನವನು
ನೀನಿತ್ತ ಪ್ರಸಾದವೆಂದು
ನಮಸ್ಕರಿಸಿ ಸೇವಿಸಿದರೆ
ಯಾವ ರೋಗರುಜನಗಳಿಲ್ಲ||

ಬಂದದ್ದನ್ನೆಲ್ಲವ
ನೀನಿತ್ತ ಕರುಣೆ ಎಂದರೆ
ಯಾವ ನೋವಿರುವುದಿಲ್ಲ|
ಇರದ ಭಾಗ್ಯವ
ಬಯಸಿ ಬೇಡುತ ನಿನ್ನನು
ಸ್ವಾರ್ಥಸಾಧನೆಗೆ ಪೂಜಿಸೆ ತರವಲ್ಲ|
ನೀ ಇತ್ತುದನೇ ಸ್ವೀಕರಿಸಿ ಅನುಭವಿಸೆ
ಆ ಬದುಕು ನಿಜಕ್ಕೂ ಅರ್ಥಮಯ
ಇಲ್ಲದಿರೆ ಬರೀ ವ್ಯರ್ತವೀಜೀವನ ಸಮಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರದ ಆಶ್ವಾಸನೆ
Next post ಏನು ಬೇಡಲಿ ಹರಿಯೆ!

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys